Skip to main content

Thirthahalli jatre 2022/ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆ/Tirthahalli Ellamavasya fair of Lord Sri Rameshwar

 ಕರ್ನಾಟಕದಲ್ಲಿ ಎಳ್ಳು ಅಮವಾಸ್ಯೆ 2022 - ಎಲ್ಲೆಡೆ ಅಮವಾಸ್ಯೆ



ಅಮವಾಸ್ಯೆಗೆ ಎರಡು ದಿನ ಮೊದಲೇ ಆರಂಭವಾಗುವ ಜಾತ್ರೆಯ ಸಾಂಪ್ರದಾಯಿಕ ಆಚರಣಾ ವಿಧಿಗಳು ಮುಗಿಯುವುದು ಐದನೇಯ ದಿನದ ತೆಪ್ಪೋತ್ಸವ ಅಥವಾ ಓಕಳಿಯ ಕಾರ್ಯಕ್ರಮದಲ್ಲಿ. ಜನರಿಗೆ ಜಾತ್ರೆ ಮೂರು ದಿನಗಳದ್ದಾದರೂ ಕಾರ್ಯಕ್ರಮ ವ್ಯವಸ್ಥಾಪಕರು ಮತ್ತು ಪುರೋಹಿತ ವರ್ಗದವರಿಗೆ ಮಾತ್ರ ಐದು ದಿನಗಳು. ಅಂಗಡಿ-ಮುಂಗಟ್ಟುಗಳು ಜಾತ್ರೆಗೆ ಎರಡು-ಮೂರು ದಿನಗಳ ಮೊದಲೇ ಬಂದು ತಳವೂರುತ್ತವೆ. ಮುಂದಿನ ಸಂಕ್ರಾಂತಿಯವರೆಗೂ ಹಾಗೂ-ಹೀಗೂ ಕಾಲ ತಳ್ಳಿ ಸಂಕ್ರಾಂತಿಯ ಚಿಕ್ಕತೇರು ಜಾತ್ರೆಯನ್ನು ಕೂಡ ಮುಗಿಸಿಯೇ ಅವರು ಹೊರಡುವುದು.



 ಜಾತ್ರೆ ನಡೆಯುವುದು ತೀರ್ಥಹಳ್ಳಿಯ ತುಂಗಾ ನದಿಯ ದಡದಮೇಲಿರುವ ಶ್ರೀ ರಾಮೇಶ್ವರನ ಸನ್ನಿಧಿಯಲ್ಲಿ. ದೂರ ದೂರದ ಊರಿನಿಂದ ಜನ ಸಾಗರವಾಗಿ ತುಂಗೆಯ ಮಡಿಲಲ್ಲಿ ನೆರೆಯುತ್ತಾರೆ. ತುಂಗೆಯ ಒಡಲಲ್ಲಿ ತನ್ನ ಪಾಪವನ್ನು ಕಳೆದ ಪರಶುರಾಮನ ಕೊಂಡದಲ್ಲಿ ಭಕ್ತಿಯಿಂದ ಮುಳುಗೇಳುತ್ತಾರೆ. ತಮ್ಮ ಇಡೀ ಜನ್ಮದ ಪಾಪ ನಿವಾರಣೆಯಾಯಿತೆಂದು ಭಾವಿಸಿ ಶ್ರೀ ರಾಮೇಶ್ವರನ ಪ್ರಸಾದದೊಂದಿಗೆ ಮರಳುತ್ತಾರೆ. ಮರುದಿನ ರಥೋತ್ಸವ ಬೆಳಗಿನಿಂದಲೇ ನೆರೆದ ಜನರಲ್ಲಿ ಸಂಭ್ರಮ-ಲವಲವಿಕೆ ದೇವರನ್ನು ಏರಿಸಿಕೊಂಡ ತೇರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸುತ್ತುವರಿದು ಹಿಂತಿರುಗುವಾಗ ರಾತ್ರಿಯೇ ಆಗಿರುತ್ತದೆ. ಮರುದಿವಸ ತೆಪ್ಪೋತ್ಸವ, ಸಂಜೆಗೆ ತುಂಗೆಯ ದಡದಲ್ಲಿ ಜನಸಾಗರವೇ ನೆರೆಯುತ್ತದೆ. ತೆಪ್ಪೋತ್ಸವವನ್ನು ಅದ್ದೂರಿಯಾಗಿ ವ್ಯವಸ್ಥೆಗೊಳಿಸಲೆಂದೇ ರಚನೆಯಾದ ತೆಪ್ಪೋತ್ಸವ ಸಮಿತಿ ಪಾದರಸದಂತೆ ಚಲಿಸುತ್ತಾ ಎಲ್ಲಾ ವ್ಯವಸ್ಥೆಗಳನ್ನು ಮಾಡಿರುತ್ತದೆ. ಪೂರ್ಣ ಕತ್ತಲು ಆವರಿಸುತ್ತಿದ್ದಂತೆಯೇ ಸಿಡಿಮದ್ದುಗಳು ಆಗಸದಲ್ಲಿ ಸಿಡಿಯುತ್ತಾ ಬಣ್ಣದ ಚಿತ್ತಾರ ಬಿಡಿಸತೊಡಗುತ್ತವೆ.

     ಇತ್ತ ಕಡೆ ಶ್ರೀ ರಾಮೇಶ್ವರ ದೇವರನ್ನ ರಾಮಮಂಟಪದಲ್ಲಿ ಕೂರಿಸಿ ಸ್ನಾನಕ್ಕೆ ಸಿದ್ಧಗೊಳಿಸುತ್ತಾರೆ. ಜನರು ಸ್ನಾನ ಮಾಡುವ ದಿನ ದೇವರಿಗೆ ಕೇವಲ ಹನೀಕರಿಸುತ್ತಾರೆ. ಈ ದಿನ ದೇವರಿಗೆ ಪರಶುರಾಮ ಕೊಂಡದಲ್ಲಿ ಪೂರ್ತಿ ತೀರ್ಥಸ್ನಾನ ಮಾಡಿಸಿ ತೆಪ್ಪದಲ್ಲಿ ಉತ್ಸವಕ್ಕೆ ಕರೆದುಕೊಂಡು ಹೋಗುತ್ತಾರೆ. ತೆಪ್ಪೋತ್ಸವ ಮುಗಿದ ನಂತರ ದೇವರನ್ನು ರಾಮೇಶ್ವರ ದೇವಸ್ಥಾನದ ಎದುರು ಮಂಟಪದಲ್ಲಿ ಕೂರಿಸುತ್ತಾರೆ. ಹೊರಗಿನ ಶಿವದೇವರು ಬಂದಾಗ ದೇವಸ್ಥಾನದ ಒಳಗಿನ ಪಾರ್ವತಿ ಬಾಗಿಲು ತೆರೆಯುವುದಿಲ್ಲ. ಇದರ ನಡುವೆ ನಂದಿ ರಾಜಿ ಮಾಡಿ ಕೊನೆಗೂ ಶಿವ ದೇವರು ದೇವಸ್ಥಾನವನ್ನು ಪ್ರವೇಶಿಸುತ್ತಾರೆ. ಸಾಂಪ್ರದಾಯಿಕ ವಿಧಿ-ವಿಧಾನಗಳು ನೆರವೇರಿದ ನಂತರ ಜಾತ್ರೆ ಮುಗಿಯುತ್ತದೆ. ನಂತರ ಜನವರಿ ೧೪-೧೫ಕ್ಕೆ ಬರುವ ಸಂಕ್ರಾಂತಿಗೆ ಚಿಕ್ಕ ರಥೋತ್ಸವವೊಂದು ನಡೆಯುತ್ತದೆ. ಅಲ್ಲಿಗೆ ಜಾತ್ರೆ ಸಂಪೂರ್ಣವಾಗಿ ಮುಗಿಯುತ್ತದೆ. ಮತ್ತೆ ಸಾರ್ವಜನಿಕ ಉತ್ಸವ-ಆಚರಣೆಗಳಿಗಾಗಿ ಮುಂದಿನ ವರ್ಷದ ಎಳ್ಳಮಾವಾಸ್ಯೆ ಜಾತ್ರೆಯನ್ನೇ ಕಾಯಬೇಕು.




ಶ್ರಾದ್ಧ - ಯೆಳ್ಳು ಅಮಾವಾಸ್ಯೆಯಂದು ತರ್ಪಣ

ಶ್ರಾದ್ಧ, ತಿಲ ತರ್ಪಣ, ಬಡವರ ಭೋಜನ ಮತ್ತು ಇತರ ದಾನಗಳನ್ನು ಮಾಡುವ ಜನರು ಶಾಂತಿ ಮತ್ತು ಸಮೃದ್ಧಿಯನ್ನು ಹೊಂದುತ್ತಾರೆ ಎಂಬುದು ಸಾಮಾನ್ಯ ನಂಬಿಕೆ. ಜನ ಪಿತ್ರಾಂತರ್ಯಾಮಿ ಶ್ರೀಹರಿಯ ಪೂಜೆಯನ್ನೂ ಮಾಡುತ್ತಾರೆ. ಪಿತೃ ದೇವತೆಗಳು ಮತ್ತು ಅವರ ಅಂತರ್ಯಾಮಿ (ಮೃತ ಪೂರ್ವಜರು) ಈ ದಿನವನ್ನು ಆಚರಿಸುವುದರಿಂದ ಭೂಮಿಯ ಮೇಲಿನ ಅವರ ವಂಶಸ್ಥರು ಆಶೀರ್ವದಿಸುತ್ತಾರೆ ಮತ್ತು ಸಂತೋಷಪಡುತ್ತಾರೆ.


ಈ ದಿನ ಶ್ರಾದ್ಧ ಮಾಡುವವರಿಗೆ ಪಾಪಗಳು ಸಂಪೂರ್ಣ ನಿವಾರಣೆಯಾಗುತ್ತವೆ. ಜನರು ತರ್ಪಣ ಮತ್ತು ಶ್ರಾದ್ಧ ಮಾಡುವ ಮೊದಲು ಪವಿತ್ರ ನದಿಗಳಲ್ಲಿ ಸಮುದ್ರ ಸ್ನಾನ ಅಥವಾ ಸ್ನಾನ ಮಾಡುತ್ತಾರೆ.


ಉತ್ಸವದ ಮೊದಲನೆಯ ದಿನದಂದು ರಾಮೇಶ್ವರ ದೇವಸ್ಥಾನದಲ್ಲಿರುವ ಉತ್ಸವ ಮೂರ್ತಿಯನ್ನು ಸಡಗರದಿಂದ ತುಂಗಾ ನದಿಯಲ್ಲಿರುವ ಪರಶುರಾಮ ತೀರ್ಥಕ್ಕೆ ತಂದು ಪುಣ್ಯಾಭಿಷೇಕವನ್ನು ನೆರವೇರಿಸಲಾಗುತ್ತದೆ. ನಂತರ ನೆರೆದಿರುವ ಭಕ್ತಾದಿಗಳು ತುಂಗೆಯ ಪವಿತ್ರ ನೀರಿನಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ.

ಎರಡನೆಯ ದಿನ ತೇರೋತ್ಸವ ಜರುಗುತ್ತದೆ. ನಗರದಲ್ಲಿರುವ ರಥ ಬಿದಿಯಲ್ಲಿ ರಾಮೇಶ್ವರ ದೇವಸ್ಥಾನದ ತೇರನ್ನು ಸುಂದರವಾಗಿ ಸಿಂಗರಿಸಿ ಎಳೆಯಲಾಗುತ್ತದೆ. ನೆರೆದಿರುವ ಸಮಸ್ತ ಭಕ್ತ ಜನರು ಬಲು ಹುರುಪಿನಿಂದ ತೇರನ್ನು ಎಳೆದು ಸಂತೃಪ್ತಿಯ ಭಾವವನ್ನು ಬೀರುತ್ತಾರೆ.

ಮೂರನೆಯ ಹಾಗೂ ಕೊನೆಯ ದಿನದಂದು ಉತ್ಸವ ಮೂರ್ತಿಯನ್ನು ತುಂಗಾ ನದಿಯಲ್ಲಿ ತೆಪ್ಪದ ಮೂಲಕ ಕುರುವಳ್ಳಿ ಎಂಬಲ್ಲಿಗೆ ತೆಗೆದುಕೊಂಡು ಹೋಗಿ ಮತ್ತೆ ಮರಳಿ ಬರಲಾಗುತ್ತದೆ. ಇದನ್ನು ತೆಪ್ಪೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ.



ವಿಳಾಸ: ರಥ ಬೀದಿ ರಸ್ತೆ, ತೀರ್ಥಹಳ್ಳಿ, ಕರ್ನಾಟಕ 577432

ಕೈಲಾಸರಣ ಶಿವ ಚಂದ್ರಮೌಳಿ ಫಣೀಂದ್ರ ಮಾತಾ ಮುಕುಟೀ ಜಲಾಲೀ ಕಾರುಣ್ಯ ಸಿಂಧು ಭವ ದುಃಖ ಹಾರೀ ತುಜವೀನ ಶಂಭೋ ಮಜ ಕೋನ ತಾರೀ ॥
ಅರ್ಥ - ಓ ಕೈಲಾಸ ಪರ್ವತದ ಮೇಲೆ ಕುಳಿತಿರುವ ಶಿವನೇ, ಅಲ್ಲಿ ಚಂದ್ರನು ತನ್ನ ಹಣೆಯನ್ನು ಅಲಂಕರಿಸುತ್ತಾನೆ ಮತ್ತು ಸರ್ಪಗಳ ರಾಜನು ಅವನ ತಲೆಯನ್ನು ಅಲಂಕರಿಸುತ್ತಾನೆ, ಕರುಣಾಮಯಿ ಮತ್ತು ಭ್ರಮೆಯನ್ನು ಹೋಗಲಾಡಿಸುವವನು, ನೀನು ಮಾತ್ರ ನನ್ನನ್ನು ರಕ್ಷಿಸಬಲ್ಲೆ. ನಾನು ನಿನಗೆ ಶರಣಾಗುತ್ತೇನೆ.

ಔಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಸ್ತಿ ವರ್ಧನಂ ಉರ್ವಾರುಕಮಿವ ಬಂಧನಾತ್ ಮೃತ್ಯೋರ್ ಮುಕ್ಷೀಯ ಮಾಮೃತಾತ್
ಅರ್ಥ -ನಾವು 3 ಕಣ್ಣುಗಳನ್ನು ಹೊಂದಿರುವ ಮತ್ತು ಎಲ್ಲಾ ಜೀವಿಗಳನ್ನು ಬೆಳೆಸುವ ಪರಿಮಳಯುಕ್ತ ಶಿವನನ್ನು ಪೂಜಿಸುತ್ತೇವೆ. ಸೌತೆಕಾಯಿಯೂ ಬಳ್ಳಿಯೊಂದಿಗಿನ ತನ್ನ ಬಂಧದಿಂದ ಬೇರ್ಪಟ್ಟಂತೆ ಅವನು ನನ್ನನ್ನು ಸಾವಿನಿಂದ, ಅಮರತ್ವಕ್ಕಾಗಿ ಮುಕ್ತಗೊಳಿಸಲಿ.



Comments

Popular posts from this blog

CBSE ವಿದ್ಯಾರ್ಥಿವೇತನ 2022 ಮಾಹಿತಿ | CBSE Scholarship 2022 Information | Central Board Of Secondary Education Scholarship 2022

  cbse scholarship 2022 ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಯಿಂದ ಆರಂಭಿಸಲಾದ CBSE ವಿದ್ಯಾರ್ಥಿವೇತನವು ಅತ್ಯುತ್ತಮ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುತ್ತದೆ. ಮಂಡಳಿಯು XI ತರಗತಿಯಿಂದ ಕಾಲೇಜು ಅಥವಾ ವಿಶ್ವವಿದ್ಯಾನಿಲಯದಲ್ಲಿ ಪದವಿಯನ್ನು ಪಡೆಯುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಒದಗಿಸುತ್ತದೆ.  ಒಂಟಿ ಹೆಣ್ಣು ಮಗುವಿಗೆ ಮೆರಿಟ್ CBSE ವಿದ್ಯಾರ್ಥಿವೇತನದ ಆಯ್ಕೆಯಾದ ಮಹಿಳಾ ವಿದ್ಯಾರ್ಥಿಗಳು ತಿಂಗಳಿಗೆ INR 500 ಸ್ವೀಕರಿಸುತ್ತಾರೆ ಮತ್ತು CBSE ವಿದ್ಯಾರ್ಥಿವೇತನದ CSSS ಗೆ ಆಯ್ಕೆಯಾದವರು INR 20,000 ವರೆಗೆ ಸ್ವೀಕರಿಸುತ್ತಾರೆ . ಒಂಟಿ ಹೆಣ್ಣು ಮಗುವಿನ CBSE ವಿದ್ಯಾರ್ಥಿವೇತನ ಅರ್ಜಿಯ ಕೊನೆಯ ದಿನಾಂಕ ನವೆಂಬರ್ 14th, 2022 ಆಗಿದೆ .  CBSE ವಿದ್ಯಾರ್ಥಿವೇತನದ ವಿವರಗಳು ನಡೆಸಿಕೊಟ್ಟರು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಅರ್ಹತೆ 10 ಮತ್ತು 12 ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಪ್ರದೇಶ ಭಾರತ ಪ್ರತಿಫಲಗಳು INR 20,000 ವರೆಗೆ ಅರ್ಜಿಯ ಕೊನೆಯ ದಿನಾಂಕ ನವೆಂಬರ್ 14, 2022 ಅಧಿಕೃತ ಜಾಲತಾಣ Click Here ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ Click Here ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ Click Here ಡೌನ್ಲೋಡ್‌ ಅಪ್ಲಿಕೇಶನ್ Click Here Apply More   Scholarship :...

Kunchikal falls/Abbe Falls/ಕುಂಚಿಕಲ್ ಜಲಪಾತ/ಅಬ್ಬೆ/about of Kunchikal Falls/about of abbe falls/Kunchikal falls information/abbe falls information/abbe jalapathadabagge mahithi

 K unchikal falls/Abbe Falls/ಕುಂಚಿಕಲ್ ಜಲಪಾತ/ಅಬ್ಬೆ ಕುಂಚಿಕಲ್ ಅಬ್ಬೆ ಎಂದೂ ಕರೆಯಲ್ಪಡುವ ಕುಂಚಿಕಲ್ ಜಲಪಾತವು ಕರ್ನಾಟಕದ ಉಡುಪಿ-ಶಿವಮೊಗ್ಗ ಜಿಲ್ಲೆಯ ಗಡಿಯಲ್ಲಿರುವ ಮಾಸ್ತಿಕಟ್ಟೆ-ಹುಲಿಕಲ್‌ಗೆ ಬಹಳ ಹತ್ತಿರದಲ್ಲಿದೆ. ಶಿವಮೊಗ್ಗ ನಗರದಿಂದ ಕುಂಚಿಕಲ್ ಜಲಪಾತದ ಒಟ್ಟು ದೂರ 97 ಕಿಲೋಮೀಟರ್. ವರಾಹಿ ನದಿಯು ಹುಲಿಕಲ್ ಘಾಟಿ ದೇವಸ್ಥಾನದ ಸಮೀಪವಿರುವ ನೂರು ಬಂಡೆಗಳ ರಚನೆಗಳನ್ನು ಕೆಳಗೆ ಬೀಳಿಸುತ್ತದೆ. ಕುಂಚಿಕಲ್ ಜಲಪಾತವು ಭಾರತದಲ್ಲಿ ಅತಿ ಎತ್ತರದ ಜಲಪಾತವಾಗಿದೆ ಎಂದು ನಂಬಲಾಗಿದೆ. ಜಲಪಾತದ ಸಮೀಪದಲ್ಲಿ ಸ್ಥಾಪಿಸಲಾದ ಜಲವಿದ್ಯುತ್ ಸ್ಥಾವರವು ನೀರಿನ ಹರಿವನ್ನು ಬಹಳ ಕಡಿಮೆ ಮಾಡಿದೆ. ಕುಂಚಿಕಲ್ ಜಲಪಾತವನ್ನು ಸುತ್ತುವರೆದಿರುವ ಹಲವಾರು ಸಣ್ಣ ಮತ್ತು ಸುಂದರವಾದ ಜಲಪಾತಗಳಿವೆ, ಇದು ಸುಂದರವಾದ ದೃಶ್ಯವನ್ನು ಮಾಡುತ್ತದೆ. ಜಲಪಾತಗಳ ಎತ್ತರ: ಕುಂಚಿಕಲ್ ಜಲಪಾತವು ಸಾಮಾನ್ಯವಾಗಿ ಕಲ್ಲಿನ ಹಾದಿಯಲ್ಲಿ ಬೀಳುತ್ತದೆ ಮತ್ತು ಜಲಪಾತದ ಒಟ್ಟು ಎತ್ತರವು 455 ಮೀಟರ್ ಅಥವಾ 1,493 ಅಡಿಗಳು, ಇದು ಜಲಪಾತವು ಭಾರತದ ಅತಿ ಎತ್ತರದ ಜಲಪಾತ ಎಂಬ ಸ್ಥಾನವನ್ನು ಪಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಜಲಪಾತದ ಕ್ಯಾಸ್ಕೇಡ್ನ ಒಟ್ಟು ಉದ್ದವು 1 ಕಿಲೋಮೀಟರ್ಗಿಂತ ಹೆಚ್ಚು. ಅದರ ನೀರಿನ ಹರಿವಿನ ಬಗ್ಗೆ: ಹುಲಿಕಲ್ ಬಳಿ ಭೂಗತ ವಿದ್ಯುತ್ ಉತ್ಪಾದನಾ ಕೇಂದ್ರವಾಗಿರುವ ಮಾಸ್ತಿಕಟ್ಟೆಗೆ ಸಮೀಪದಲ್ಲಿ ಮಾಣಿ ಅಣೆಕಟ್ಟು ನಿರ್ಮಾಣದ ನಂತರ ಕುಂಚಿಕಲ್ ಜಲಪಾತದ ನೀ...

Nagara Panchami festival Information in kannada/ ನಾಗರಪಂಚಮಿ ಹಬ್ಬ/about of nagara panchami

Nagara Panchami festival / ನಾಗರಪಂಚಮಿ ಹಬ್ಬ ನಾಗರ ಪಂಚಮಿ  ಹಬ್ಬವನ್ನು ಭಾರತದಾದ್ಯಂತ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನದಂದು ಹಾವುಗಳನ್ನು ಪೂಜಿಸಲಾಗುತ್ತದೆ. ಈ ಹಬ್ಬವನ್ನು ಭಾರತದ ವಿವಿಧ ಪ್ರಾಂತ್ಯಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಇದನ್ನು ವಿಶೇಷವಾಗಿ ದಕ್ಷಿಣ ಮಹಾರಾಷ್ಟ್ರ ಮತ್ತು ಭಾರತದ ಬಂಗಾಳದಲ್ಲಿ ಆಚರಿಸಲಾಗುತ್ತದೆ. ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಒರಿಸ್ಸಾದ ಕೆಲವು ಭಾಗಗಳಲ್ಲಿ, ಈ ದಿನದಂದು ಸರ್ಪಗಳ ದೇವತೆಯಾದ ಮಾನಸಾಳನ್ನು ಪೂಜಿಸಲಾಗುತ್ತದೆ. ಈ ದಿನದಂದು ಕೇರಳದ ದೇವಾಲಯಗಳಲ್ಲಿ ಶೇಷನಾಗನ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ನಾಗರ ಪಂಚಮಿ ಹಬ್ಬವನ್ನು ಯಾಕೆ ಆಚರಿಸಲಾಗುತ್ತದೆ ಗೊತ್ತಾ..? ನಾಗರ ಪಂಚಮಿ ಆಚರಿಸಲು ಈ ಕಾರಣಗಳು ಮತ್ತು ನಂಬಿಕೆಗಳಿವೆ.. ನಾಗ ಪಂಚಮಿ ಹಬ್ಬ ಅಥವಾ ಹಬ್ಬವು ಹಿಂದೂ ಮಹಿಳೆಯರಿಗೆ ಮಂಗಳಕರ ದಿನವಾಗಿದೆ. ಭಾರತ, ನಾಗರಹಾವು ಮತ್ತು ಹಾವು ಮೋಡಿ ಮಾಡುವವರ ನಾಡು, ಅದು ಪ್ರಸಿದ್ಧವಾಗಿದೆ, ಹಾವುಗಳಿಗೆ ವಿಶೇಷ ಗೌರವವಿದೆ. ಹಿಂದೂ ಪುರಾಣಗಳಲ್ಲಿ ಸರ್ಪಗಳು ಅನೇಕ ದೇವರುಗಳೊಂದಿಗೆ ಸಂಬಂಧ ಹೊಂದಿವೆ. ನಾಗ (ಹಾವು) ಪಂಚಮಿಯು ಹಿಂದೂ ಕ್ಯಾಲೆಂಡರ್‌ನ ಶ್ರಾವಣ ಮಾಸದ 5 ನೇ ದಿನವಾಗಿದೆ. ಈ ದಿನದಂದು ಹಾವಿನ ಮೂರ್ತಿಗಳು ಅಥವಾ ವಿಗ್ರಹಗಳನ್ನು ದೇಶದಾದ್ಯಂತ ತಯಾರಿಸಿ ಪೂಜಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಮರದ ಹಲಗೆಗಳ...