Skip to main content

dr bro/Dr bro Betrayal/dr bro YouTuber

 

ಡಾ ಬ್ರೋ'ಗೆ ಮೋಸ: ಬೆನ್ನಿಗೆ ಚೂರಿ ಹಾಕಿದರು ಎಂದ ಸಾಹಸಿ ಯೂಟ್ಯೂಬರ್


Dr Bro: ಡಾ ಬ್ರೋಗೆ ಅನ್ಯಾಯ, ಕ್ಷಮೆ ಕೇಳಿದ ಯೂಟ್ಯೂಬರ್ ಲೋಹಿತ್, ಇಷ್ಟಕ್ಕೂ ನಡೆದದ್ದೇನು?

ಇತ್ತೀಚೆಗೆ ಕನ್ನಡ ಡಿಜಿಟಲ್ ಸ್ಪೇಸ್‌ನಲ್ಲಿ ಯೂಟ್ಯೂಬರ್‌ಗಳು, ಯೂಟ್ಯೂಬ್‌ ಚಾನೆಲ್‌ಗಳು ಮಳೆಗೆ ಎಲ್ಲೆಂದರಲ್ಲಿ ಹುಟ್ಟುವ ಅಣಬೆಗಳಂತೆ ಮಿತಿ ಮೀರಿ ಹುಟ್ಟಿಕೊಂಡಿವೆ. ಆದರೆ ನಿಜವಾಗಿಯೂ ನೋಡತಕ್ಕ ಕಂಟೆಂಟ್ ಹಾಕುವವರು ಬೆರಳೆಣಿಕೆಯ ಯೂಟ್ಯೂಬರ್‌ಗಳಷ್ಟೆ.

ಕನ್ನಡದಲ್ಲಿ ಒರಿಜಿನಲ್ ಕಂಟೆಂಟ್ ಹಾಕುವ ಜನಪ್ರಿಯ ಯೂಟ್ಯೂಬರ್ ಎಂದರೆ ಅದು 'ಡಾ ಬ್ರೋ'. ಬಹಳ ವರ್ಷಗಳಿಂದಲೂ ಯೂಟ್ಯೂಬ್ ವಿಡಿಯೋಗಳನ್ನು ಮಾಡುತ್ತಿರುವ ಡಾ ಬ್ರೋ (ನಿಜವಾದ ಹೆಸರು ಗಗನ್) ಅವರ ಟ್ರಾವೆಲ್ ವ್ಲಾಗ್‌ಗಳಿಗೆ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ.

ಭಾರತೀಯರು ನೋಡಿರದ, ಕೇಳಿರದ ಊರುಗಳಿಗೆ ಭೇಟಿ ನೀಡಿ ಅಲ್ಲಿನ ಹಳ್ಳಿಗಳು, ಗಲ್ಲಿಗಳನ್ನು ಸುತ್ತಿ ತನ್ನ ಆಡುಭಾಷೆಯಲ್ಲಿಯೇ ಆಯಾ ಸ್ಥಳದ ಮಹಿಮೆ ಸಾರುವ ಡಾ ಬ್ರೋ ಎಂದರೆ ಕನ್ನಡಿಗರಿಗೆ ಒಂದು ರೀತಿಯ ಹೆಮ್ಮೆ ಸಹ. ಆದರೆ ಇದೀಗ ಡಾ ಬ್ರೋಗೆ ತನ್ನದೇ ಫೆಲೋ ಯೂಟ್ಯೂಬರ್ ಒಬ್ಬ ಮೋಸ ಮಾಡಿದ್ದಾನೆ ಈ ಬಗ್ಗೆ ಸ್ವತಃ ಡಾ ಬ್ರೋ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

'ಲೋಹಿತ್ ಕನ್ನಡ ಟ್ರಾವೆಲರ್' ಚಾನೆಲ್‌ನಿಂದ ಮೋಸ

ಲೋಹಿತ್ ಕನ್ನಡ ಟ್ರಾವೆಲರ್' ಚಾನೆಲ್‌ನಿಂದ ಮೋಸ

ಡಾ ಬ್ರೋ ಅವರಿಂದ ಸ್ಪೂರ್ತಿ ಪಡೆದು ಹಲವರು ಟ್ರಾವೆಲ್ ವ್ಲಾಗ್ ಆರಂಭಿಸಿದ್ದು ಅದರಲ್ಲಿ 'ಲೋಹಿತ್ ಕನ್ನಡ ಟ್ರಾವೆಲರ್' ಸಹ ಒಬ್ಬರು. ಇದೇ ಯೂಟ್ಯೂಬರ್‌ನಿಂದ ತಮಗೆ ನಂಬಿಕೆ ದ್ರೋಹ ಆಗಿದೆ ಎಂದು ಡಾ ಬ್ರೋ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಕಮ್ಯುನಿಟಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಕನ್ನಡಿಗರ ಮೆಚ್ಚಿನ ಡಾ ಬ್ರೋ ಹಾಕಿರುವ ಪೋಸ್ಟ್ ಇದೀಗ ವೈರಲ್ ಆಗಿದ್ದು, ಬೇರೆ ಕೆಲವು ಯೂಟ್ಯೂಬರ್‌ಗಳು ಸಹ ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.

ತಾಂಜಾನಿಯಾಕ್ಕೆ ತೆರಳಿದ್ದ ಡಾ ಬ್ರೋ

ಆಗಿರುವುದಿಷ್ಟು, ಡಾ ಬ್ರೋ ವ್ಲಾಗಿಂಗ್‌ಗಾಗಿ ತಾಂಜಾನಿಯಾ ದೇಶದ ಪ್ರವಾಸಕ್ಕೆ ಹೋಗಿದ್ದಾಗ ಅವರಿಗೆ ಮೆಸೇಜ್ ಮಾಡಿರುವ 'ಲೋಹಿತ್ ಕನ್ನಡ ಟ್ರಾವೆಲರ್' ನೀವು ತಾಂಜಾನಿಯಾದ ಹಾಡ್ಜಬಿ ಬುಡಕಟ್ಟು ಜನಾಂಗದವರ ವಿಡಿಯೋ ಮಾಡ್ತೀರಾ? ಎಂದು ಕೇಳಿದ್ದಾರೆ. ಅದಕ್ಕೆ ಡಾ ಬ್ರೋ ಹೌದು, ನಾನಾಗಲೇ ಅವರ ಬಗ್ಗೆ ಅಧ್ಯಯನ ಮಾಡಿದ್ದೇನೆ ಭಾನುವಾರ ವಿಡಿಯೋ ಶೂಟ್ ಮಾಡ್ತೀನಿ ಎಂದಿದ್ದಾರೆ. ಅಂತೆಯೇ ಶೂಟ್ ಸಹ ಮಾಡಿದ್ದಾರೆ. ಆದರೆ ಈ ಲೋಹಿತ್ ಕನ್ನಡ ಟ್ರಾವೆಲರ್ ಕೂಡಲೇ ತಾಂಜಾನಿಯಾಗೆ ಹೋಗಿ ಅಲ್ಲಿ ಹಾಡ್ಜಬಿ ಬುಡಕಟ್ಟು ಜನರೊಟ್ಟಿಗೆ ವಿಡಿಯೋ ಮಾಡಿ ಅದನ್ನು ಅಪ್‌ಲೊಡ್ ಮಾಡಿಬಿಟ್ಟಿದ್ದಾರೆ. ಇದು ಡಾ ಬ್ರೋಗೆ ಬೇಸರಕ್ಕೆ ಕಾರಣವಾಗಿದೆ



ಬೆನ್ನಿಗೆ ಚೂರಿ ಹಾಕಿದ್ದಾರೆ: ಡಾ ಬ್ರೋ

'ಹೆಲ್ಪ್ ಮಾಡಿದವರಿಗೇ ಬೆನ್ ಹಿಂದೆ ಚೂರಿ ಹಾಕೋ ಜನರಿರುತ್ತಾರೆ' ಅಂತ ಕೇಳಿದ್ದೆ. ಈಗ ಸ್ವತಃ ನಂಗೆ ಅನುಭವ ಆಗಿದೆ' ಎಂದು ಬರೆದುಕೊಂಡಿರುವ ಡಾ ಬ್ರೋ, ನಾನು ಒಂದು ವಾರದಿಂದ ಆ ಒಂದು ವಿಡಿಯೋಗಾಗಿ ಕಷ್ಟಪಟ್ಟಿದ್ದೆ. ನಾನು ಹೆಚ್ಚು ವಿಡಿಯೋ ಶೂಟ್ ಮಾಡುವುದರಿಂದ ನಾನು ಎಡಿಟ್‌ಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತೇನೆ ಎಂಬುದು ತಿಳಿದುಕೊಂಡು ಒಂದೇ ದಿನದಲ್ಲಿ ತಾಂಜಾನಿಯಾಗೆ ಬಂದು ತರಾತುರಿಯಲ್ಲಿ ಶೂಟ್ ಮಾಡಿ, ನಾನು ವಿಡಿಯೋ ಮಾಡುತ್ತಿದ್ದೇನೆ ಎಂದು ಹೇಳಿದ್ದರೂ ಅಪ್‌ಲೋಡ್ ಮಾಡಿರುವುದು ಸರಿಯಲ್ಲ ಎಂದು ಡಾ ಬ್ರೋ ಬೇಸರ ಪಟ್ಟುಕೊಂಡಿದ್ದಾರೆ.

'ಎಲ್ಲರನ್ನೂ ಬಿಟ್ಟು ನಿನ್ನ ಚಾನೆಲ್‌ಗೆ ಸಪೋರ್ಟ್ ಮಾಡಿದೆ'


'ಎಲ್ಲರನ್ನೂ ಬಿಟ್ಟು ನಿನ್ನ ಚಾನೆಲ್‌ಗೆ ಸಪೋರ್ಟ್ ಮಾಡಿದೆ'

ಅಲ್ಲದೆ, ನನ್ನನ್ನು ಆಲ್ ಮೋಸ್ಟ್ ಎಲ್ಲ ನ್ಯೂಸ್ ಚಾನೆಲ್ ನವರೂ ಇಂಟರ್ ವ್ಯೂಗೆ ಕರೆದಿದ್ದರು , ಕನಿಷ್ಠ 100 ಜನ ಯೂಟ್ಯೂಬರ್ಸ್ ಕೊಲಾಬ್ರೆಷನ್ ಗೆ ಕರೆದಿದ್ದರು. ಎಲ್ಲ ಬಿಟ್ಟು 'ಲೋಹಿತ್ ಕನ್ನಡ ಟ್ರಾವೆಲರ್' ಕಷ್ಟದಲ್ಲಿದ್ದಾನೆಂದು ಅವನ ವಿಡಿಯೋದಲ್ಲಿ ಕೊಲ್ಯಾಬರೇಟ್ ಮಾಡಿದೆ. ನನ್ನ ಚಾನೆಲ್‌ನಲ್ಲಿ ಸಹ ನಾನು ಸಬ್‌ಸ್ಕ್ರೈಬ್ ಆಗಿ ಎಂದು ಹೇಳಿಕೊಂಡಿರಲಿಲ್ಲ ಆದರೆ ಅವನ ವಿಡಿಯೋದಲ್ಲಿ ಸಬ್‌ಸ್ಕ್ರೈಬ್ ಮಾಡಿ ಎಂದು ಹೇಳಿದೆ. ಆದರೆ ಮಾಡಿದ ಉಪಕಾರಕ್ಕೆ ಈಗ ನನಗೇ ದ್ರೋಹ ಎಸಗಿದ್ದಾನೆ ಎಂದು ಡಾ ಬ್ರೋ ಬರೆದುಕೊಂಡಿದ್ದಾರೆ. ಇನ್ನು ಮುಂದೆಯಾದರೂ ಸಹಾಯ ಮಾಡಿದವರಿಗೆ ಯಾವತ್ತು ನಂಬಿಕೆದ್ರೋಹ ಮಾಡಬೇಡಿ ಪ್ಲೀಸ್ ಎಂದು ಮನವಿ ಮಾಡಿದ್ದಾರೆ ಡಾ ಬ್ರೋ.

ಗೊತ್ತಾಗದೇ ಅಪ್‌ಲೋಡ್ ಮಾಡಿದೆ ಎಂಬ ಲೋಹಿತ್


ಡಾ ಬ್ರೊ ಕ್ಷಮೆ ಕೇಳಿರುವ ಲೋಹಿತ್, 'ನಿಮಗೆ ತೊಂದರೆ ಕೊಡುವ ಉದ್ದೇಶ ನನಗಿರಲಿಲ್ಲ. ನೀವು ಅಲ್ಲಿಗೆ ಹೋಗುತ್ತೀರಾ ಅಂತ ನಾನು ನಿಮ್ಮನ್ನು ಕೇಳಿ ಆಗಲೇ ಒಂದು ವಾರವಾಗಿತ್ತು. ಆದರೆ ನೀವು ಅದರ ಬಗ್ಗೆ ವೀಡಿಯೊ ಅಪ್‌ಲೋಡ್ ಮಾಡಿಲ್ಲ. ಹೀಗಾಗಿ ನೀವು ಅಲ್ಲಿಗೆ ಹೋಗಿಲ್ಲ ಎಂದು ನಾನು ಭಾವಿಸಿದೆ, ಹಾಗಾಗಿ ನಾನು ಹೋಗಿ ಚಿತ್ರೀಕರಿಸಿ ಅಪ್‌ಲೋಡ್ ಮಾಡಿದ್ದೇನೆ. ಆ ಬುಡಕಟ್ಟಿನ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ್ದೆ. ಅಂತಹ ಅದ್ಭುತ ಸ್ಥಳವನ್ನು ಜನರಿಗೆ ತೋರಿಸುವುದು ನನಗೆ ಇಷ್ಟ. ಹಾಗಾಗಿ ನಾನು ತಾಂಜಾನಿಯಾಗೆ ಹೋಗಿ ವಿಡಿಯೋ ಶೂಟ್ (Vedio Shoot) ಮಾಡಿ ಅಪ್‌ಲೋಡ್ ಮಾಡಿದೆ.

ನೀವು ಆ ದೇಶದಲ್ಲಿದ್ದರೆ ನಾನು ಆ ದೇಶಕ್ಕೆ ಬರಬಾರದು ಎಂದು ಗೊತ್ತಿರಲಿಲ್ಲ. ನೀವು ಅಲ್ಲಿಗೆ ಹೋಗುತ್ತೀರಾ ಎಂದಷ್ಟೇ ನಾನು ಕೇಳಿದ್ದೆ. ನಿಮ್ಮಲ್ಲಿ ಸಹಾಯವನ್ನಾಗಲೀ, ವಿವರಗಳನ್ನಾಗಲೀ ಕೇಳಿರಲಿಲ್ಲ. ಇಷ್ಟಾಗಿಯೂ ನಾನು ಅಪ್‌ಲೋಡ್(Upload) ಮಾಡಿರುವ ಆ ವಿಡಿಯೋ ನಿಮಗೆ ತೊಂದರೆ ಕೊಡುತ್ತಿದ್ದರೆ ನನ್ನನು ಕ್ಷಮಿಸಿ, ಹಿಂದೆ ನಾನು ಹೇಳಿದಂತೆ ನೀವೇ ನನ್ನ ಸ್ಫೂರ್ತಿ(Inspiration), ನಿಮ್ಮ ವ್ಲಾಗ್ ನನಗೆ ಯಾವತ್ತೂ ಇಷ್ಟ. ನನ್ನ ಕನಸಿನಲ್ಲಿಯೂ ನಿಮಗೆ ತೊಂದರೆ ಕೊಡಲು ನಾನು ಟ್ರೈ(Try) ಮಾಡಲ್ಲ, ನೀವು ಪ್ರತಿಯೊಬ್ಬ ಕನ್ನಡಿಗನಿಗೆ ಮಾದರಿ, ನೀವು ಅರ್ಥಮಾಡಿಕೊಳ್ಳುವಿರಿ ಎಂದು ಭಾವಿಸುತ್ತೇವೆ. ದಯವಿಟ್ಟು ಕ್ಷಮಿಸಿ ಬ್ರೋ' ಎಂದು ವ್ಲಾಗರ್ ಲೋಹಿತ್ ಬರೆದಿದ್ದಾರೆ


Comments

Popular posts from this blog

ಉಚಿತ ಬ್ಯೂಟಿಷಿಯನ್ ತರಬೇತಿ: ಸ್ವ ಉದ್ಯೋಗ ಪ್ರಾರಂಭಿಸಲು ಸುವರ್ಣಾವಕಾಶ!

ಮಹಿಳೆಯರಿಗೆ ಉಚಿತ ಬ್ಯೂಟಿಷಿಯನ್ ತರಬೇತಿ – ಸ್ವ ಉದ್ಯೋಗಕ್ಕೆ ದಾರಿ ತೆರೆದ ಕೆನರಾ ಬ್ಯಾಂಕ್ RSETI ಕುಮಟಾ, ಜುಲೈ 2025: ಮಹಿಳೆಯರು ತಮ್ಮ ಕನಸಿನ ಸ್ವ ಉದ್ಯೋಗ ಆರಂಭಿಸಲು ಉತ್ತಮ ಅವಕಾಶ. ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (RSETI), ಕುಮಟಾ ಉಚಿತ ಬ್ಯೂಟಿಷಿಯನ್ ತರಬೇತಿ ಕೋರ್ಸ್ ಅನ್ನು 14 ಜುಲೈ 2025 ರಿಂದ 17 ಆಗಸ್ಟ್ 2025 ರವರೆಗೆ ಆಯೋಜಿಸಿದೆ. ಈ 35 ದಿನಗಳ ಉಚಿತ ತರಬೇತಿ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಹಾಗೂ ಸ್ವ ಉದ್ಯಮ ಆರಂಭಿಸಲು ಮಾರ್ಗದರ್ಶನ ನೀಡಲಿದೆ. ಬಿಪಿಎಲ್ ಕುಟುಂಬದವರು ಮತ್ತು ಗ್ರಾಮೀಣ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ. 📌 ಮುಖ್ಯ ಅಂಶಗಳು: ಕಾರ್ಯಕ್ರಮದ ಹೆಸರು: ಉಚಿತ ಬ್ಯೂಟಿಷಿಯನ್ ತರಬೇತಿ ಆಯೋಜಕ: ಕೆನರಾ ಬ್ಯಾಂಕ್ RSETI, ಕುಮಟಾ ಸ್ಥಳ: ಇಂಡಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರ ಕನ್ನಡ – 581343 ಅವಧಿ: 14 ಜುಲೈ 2025 – 17 ಆಗಸ್ಟ್ 2025 ಅರ್ಜಿ ವಿಧಾನ: ಆನ್ಲೈನ್ ಅಥವಾ ನೇರ ನೋಂದಣಿ ಸಂಪರ್ಕ ಸಂಖ್ಯೆ: 9449860007 / 9538281989 / 9916783825 / 888044612 🎯 ತರಬೇತಿಯ ಉದ್ದೇಶ: ✅ ಮಹಿಳೆಯರಲ್ಲಿ ಸ್ವ ಉದ್ಯೋಗ ಚಟುವಟಿಕೆಗೆ ಉತ್ತೇಜನೆ ನೀಡುವುದು ✅ ಬಿಪಿಎಲ್ ಮಹಿಳೆಯರಿಗೆ ವೃತ್ತಿಪರ ಬ್ಯೂಟಿಷಿಯನ್ ತರಬೇತಿ ನೀಡುವುದು ✅ ಗ್ರಾಮೀಣ ಹಾಗೂ ನಗರ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಕಲ್ಪಿಸುವುದು ...

Chandrayaan 3 Information In Kannada | ಇಸ್ರೋದ ಮಹತ್ವಕಾಂಕ್ಷೆಯ ಚಂದ್ರಯಾನ-3ರ ಕಡೆ ಎಲ್ಲರ ಗಮನ ,ಇಸ್ರೋ ಯೋಜನೆಯ ವಿಶೇಷತೆಯೇನು?

  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ತನ್ನ ಚಂದ್ರಯಾನ-3 ರ ಮೂರನೇ ಆವೃತ್ತಿಯನ್ನು ಜುಲೈರಂದು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಬಾಹ್ಯಾಕಾಶ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಚಂದ್ರಯಾನ-3 ಅನ್ನು ಜುಲೈ 2023 ರಲ್ಲಿ ಉಡಾವಣೆ ಮಾಡಲು ಸಜ್ಜಾಗಿದೆ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮೂರನೇ ಚಂದ್ರನ ಕಾರ್ಯಾಚರಣೆಯನ್ನು ಜುಲೈ 2023 ರಲ್ಲಿ ಪ್ರಾರಂಭಿಸಲು ಯೋಜಿಸಿದೆ. ಚಂದ್ರಯಾನ -3 ಕೊಂಡೊಯ್ಯುವ ಹೆಚ್ಚು ಸಾಮರ್ಥ್ಯದ ಚಂದ್ರನ ರೋವರ್, ಇದು ಅವಶ್ಯಕವಾಗಿದೆ ಭವಿಷ್ಯದ ಅಂತರಗ್ರಹ ಪರಿಶೋಧನೆಗಳು, ಭಾರತೀಯ ಬಾಹ್ಯಾಕಾಶ ಸಂಸ್ಥೆ, ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಪ್ರಕಾರ. 👉 ಇಸ್ರೋ ಯೋಜನೆಯಬಗ್ಗೆ ಮತ್ತಷ್ಟು ತಿಳಿಯಿರಿ Click here ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ತನ್ನ ಚಂದ್ರಯಾನ-3 ರ ಮೂರನೇ ಆವೃತ್ತಿಯನ್ನು ಜುಲೈ 12 ರಂದು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಬಾಹ್ಯಾಕಾಶ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಮುಖ ಲಿಂಕ್‌ಗಳು: ಇತ್ತೀಚಿನ ಸುದ್ದಿ APPLY HERE  ಕ್ಲಿಕ್ ಉಚಿತ ಸರ್ಕಾರಿ ಯೋಜನೆ APPLY HERE ಕ್ಲಿಕ್ ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳು APPLY HERE  ಕ್ಲಿಕ್ ಚಂದ್ರಯಾನ-3 ಜುಲೈ 2023 ರಲ್ಲಿ ಉಡಾವಣೆಗೆ ಸಿದ್ಧವಾಗಿದೆ ಎಸ್ ಸೋಮನಾಥ್ ಪ್ರಕಾರ, ಜಿಯೋಸಿಂಕ್ರೋನಸ್ ಲಾಂಚ್ ವೆಹಿಕಲ್ ಮಾರ್ಕ್-III (GSLV Mk-III) ಮು...

Bhoomi hunnime information in Kannada or seegehunnime-/ಭೂಮಿ ಹುಣ್ಣಿಮೆ ,ಬೂಮಣಿ ಹಬ್ಬ/Bhoomi hunnime bagge mahithi

ಭೂಮಿ ಹುಣ್ಣಿಮೆ ,ಬೂಮಣಿ ಹಬ್ಬ  ಭೂಮಣಿ ಹಬ್ಬ ಎಂದು ಕರೆಯುವ ಭೂಮಿ, ಬೆಳೆಯ ಪೂಜೆಯ ಹಬ್ಬವನ್ನು ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆ, ಬಯಲುನಾಡಿನಲ್ಲಿ ಸೀಗೆ ಹುಣ್ಣಿಮೆ ಎಂದು ಕರೆಯುತ್ತಾರೆ. ಎತ್ತು ಓಡಿಸುವ, ಬೆಂಕಿಯ ಮೇಲೆ ಹೋರಿ ನಡೆಸುವ ಬಯಲುಸೀಮೆಯ ಸೀಗೆ ಹುಣ್ಣಿಮೆ, ಭೂಮಿ ತಾಯಿಗೆ ಬಯಕೆ ನೀಡುವ ಭೂಮಿ ತಾಯಿಯ ಬಯಕೆಯ ಸೀಮಂತವನ್ನು ನಡೆಸುವ ಮಲೆನಾಡಿನ ಬೂಮಣಿ ಹಬ್ಬ ಆಚರಣೆಯಲ್ಲಿ ತುಸು ಭಿನ್ನ. ಮಲೆನಾಡೆಂದರೆ…. ಕಾಡು, ಪರಿಸರ, ಸಸ್ಯ, ಮಳೆ, ಬೆಳೆ ಇವುಗಳೆಲ್ಲದರ ಒಟ್ಟಂದದದ ಬದುಕೇ ಬುಡಕಟ್ಟು ಬದುಕು. ಮಲೆನಾಡಿನ ಮೂಲನಿವಾಸಿಗಳು, ಕೆಳವರ್ಗಗಳು ಪ್ರಕೃತಿ ಆರಾಧನೆಯ ಈ ಭೂಮಿ ಹುಣ್ಣಿಮೆಯನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಒಂದೆರಡು ವಾರಗಳ ಮೊದಲು ಬೂಮಣಿ ಬುಟ್ಟಿ ಅಲಂಕಾರ ಪ್ರಾರಂಭಿಸುವ ಮಹಿಳೆಯರು ಸಾಂಪ್ರದಾಯಿಕ ಚಿತ್ತಾರವನ್ನು ರಚಿಸುತ್ತಾರೆ. ನಂತರ ಮನೆಯ ಯಜಮಾನ ಹಬ್ಬದ ಅಗತ್ಯ ವಸ್ತುಗಳನ್ನು ಸಂಗ್ರಹಿಸುತ್ತಾನೆ. ಇಂಥ ಸಂಗ್ರಹಿಸಿದ ವಸ್ತುಗಳನ್ನು ಚರಗ ಅಥವಾ ಹಂಚೆಬ್ಲಿ ಹಾಗೂ ಎಡೆಯ ಪದಾರ್ಥಗಳಾಗಿ ವಿಂಗಡಿಸಲಾಗುತ್ತದೆ. ಸೊಪ್ಪು-ಕಾಯಿಗಳ ಹಸಿರು ಚರಗವನ್ನು ರೈತ ಮುಂಜಾನೆ ಜಮೀನು-ಬೆಳೆಗಳಿಗೆ ಬೀರಿ ಸಸ್ಯ, ಪ್ರಾಣಿ, ಪಕ್ಷಿಗಳಿಗೆ ನೀಡುತ್ತಾನೆ. ನಂತರ ಭೂಮಿಯೆಂದರೆ ನೆಲ, ನೆಲದ ಬೆಳೆಗಳಿಗೆ ಪೂಜೆ ಮಾಡಿ ಅಲ್ಲಿ ಕಡಬು-ಕಜ್ಜಾಯಗಳ ಥರಾವರಿ ಆಹಾರವನ್ನಿಟ್ಟು ನೈವೇದ್ಯ ಮಾಡಿ, ಎಡೆಹಾಕಿ, ತಾನೇ ತಿಂದು ಒಂದು ಎಡೆಯನ್ನು ಭೂಮಿಯಲ್ಲಿ ಹೂತು ಬೆಳೆ-ಭೂ...